Sunday, September 19, 2010

ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್"

ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್"
“ನಾನೊಂದು ಕೇವಲ ಗೊಂಬೆ ಎಂಬುದನ್ನು ಮರೆತು, ದೇವರು ನನಗೆ ಇನ್ನೊಂದು ಜೀವನದ ತುಣುಕನ್ನು ನೀಡಿದರೆ, ನನ್ನಿಂದ ಎಷ್ಟು ಸಾಧ್ಯವೋ ಅಷ್ಟು ಉತ್ತಮ ರೀತಿಯಲ್ಲಿ ಅದನ್ನು ವಿನಿಯೋಗಿಸಲು ಯತ್ನಿಸುವೆ.
ನಾನು ಯೋಚಿಸಿರುವುದನ್ನೆಲ್ಲ ಹೇಳಲು ಆಗುತ್ತದೋ ಇಲ್ಲವೋ. ಆದರೆ ಹೇಳುವುದನ್ನೆಲ್ಲ ಯೋಚಿಸಿರುತ್ತೇನೆ.
ಯೋಚನೆಗಳು, ವಸ್ತುಗಳು ಎಷ್ಟು ಬೆಲೆ ಬಾಳುತ್ತವೆಂದಲ್ಲ, ಏನನ್ನು ಪ್ರತಿನಿಸುತ್ತವೆ ಎಂದು ಮೌಲ್ಯ ಕಟ್ಟುತ್ತೇನೆ.

ಕಡಿಮೆ ನಿದ್ರಿಸುತ್ತೇನೆ, ಹೆಚ್ಚು ಕನಸುತ್ತೇನೆ. ನಾವು ಕಣ್ಣು ಮುಚ್ಚಿಕೊಂಡಿರುವ ಪ್ರತಿ ನಿಮಿಷಕ್ಕೂ ೬೦ ಸೆಕೆಂಡುಗಳಷ್ಟು ಬೆಳಕು ನಷ್ಟವಾಗುತ್ತಿರುತ್ತದೆ.
ಎಲ್ಲ ಇತರರು ನಿಂತಿರುವರೋ ಅಲ್ಲಿ ಮುಂದುವರಿಯುವೆ ; ಎಲ್ಲಿ ಇತರರು ಮಲಗಿರುವರೋ ಅಲ್ಲಿ ಎದ್ದಿರುವೆ.

ಇನ್ನೊಂದು ತುಣುಕು ಜೀವನವನ್ನು ನನಗೆ ದೇವರು ನೀಡಿದರೆ...ಸರಳವಾಗಿ ಬಟ್ಟೆ ಧರಿಸಿ, ಕಿರಣಗಳಲ್ಲಿ ಹೊರಳಾಡಿ, ದೇಹವನ್ನಷ್ಟೇ ಅಲ್ಲ ಆತ್ಮವನ್ನೂ ಬೆಳಕಿಗೆ ತೆರೆದುಕೊಂಡಿರುತ್ತೇನೆ.

ವೃದ್ಧರಾದಂತೆ ಪ್ರೇಮಿಸುವುದು ಕಡಿಮೆಯಾಗುತ್ತದೆ ಎಂಬ ತಿಳಿವಳಿಕೆ ಎಷ್ಟು ತಪ್ಪೆಂದೂ, ಪ್ರೇಮಿಸದಿರುವುದರಿಂದಲೇ ವೃದ್ಧರಾಗುತ್ತೇವೆಂದೂ ಸಾಸಿ ತೋರಿಸುತ್ತೇನೆ.

ಮಕ್ಕಳಿಗೆ ರೆಕ್ಕೆಗಳನ್ನು ನೀಡುತ್ತೇನೆ, ಆದರೆ ಸ್ವತಂತ್ರವಾಗಿ ಹಾರಲು ಬಿಡುತ್ತೇನೆ.
ವಯಸ್ಸಾದಂತೆ ಸಾವು ಸನಿಹವಾಗುವುದಲ್ಲ, ಅದು ವಿಸ್ಮೃತಿಯಿಂದ ಎಂದು ವೃದ್ಧರಿಗೆ ತಿಳಿಹೇಳುತ್ತೇನೆ.

ನಾನು ನಿಮ್ಮಿಂದ ಎಷ್ಟೊಂದು ಕಲಿತೆ...
ಏರುವ ಪರಿಶ್ರಮದ ಕುರಿತು ಚಿಂತಿಸುವುದನ್ನು ಮರೆತು ಎಲ್ಲರೂ ಬೆಟ್ಟದ ತುದಿಯಲ್ಲಿ ಬದುಕಬೇಕು ಎಂದು ಚಿಂತಿಸುತ್ತಾರೆ ಎಂಬುದನ್ನು ; ಹಸುಳೆಯೊಂದು ತಂದೆಯ ಹೆಬ್ಬೆರಳು ತಬ್ಬಿಕೊಂಡರೆ ಅದು ಶಾಶ್ವತ ಬಾಂಧವ್ಯ ಬಯಸುತ್ತಿದೆ ಎಂಬುದನ್ನು ; ತನ್ನಿಂದ ಕೆಳಗಿರುವವರನ್ನು ನೋಡುವ ಹಕ್ಕು ಅವರನ್ನು ಎತ್ತಬಯಸುವವನಿಗೆ ಮಾತ್ರ ಇರುತ್ತದೆ ಎಂಬುದನ್ನು...

ಯಾವತ್ತೂ ನೀವು ಸ್ಪಂದಿಸಿರುವುದನ್ನೇ ಹೇಳಿ, ಯೋಚಿಸಿರುವುದನ್ನೇ ಮಾಡಿ.

ಇದೇ ಕೊನೆಯ ಬಾರಿಗೆ ನಾನು ನಿಮ್ಮನ್ನು ನೋಡುತ್ತಿರುವುದು ಎಂದು ನನಗೆ ಗೊತ್ತಾದರೆ, ಆಗ ನಾನು ನಿಮ್ಮ ಆತ್ಮದ ಪೋಷಕನಂತೆ ಬಿಗಿಯಾಗಿ ತಬ್ಬಿಕೊಳ್ಳುವೆ. ಇವೇ ನನ್ನ ಕೊನೆಯ ಕ್ಷಣಗಳು ಎಂದು ನನಗೆ ಗೊತ್ತಾದರೆ ನಾನು ನಿಮಗೆ ‘ಐ ಲವ್ ಯು’ ಎಂದು ಹೇಳಬಯಸುವೆ. ಅದು ನಿಮಗೆ ಅರ್ಥವಾಗುತ್ತದೋ ಇಲ್ಲವೋ ಎಂಬುದನ್ನು ಯೋಚಿಸಲಾರೆ.

ಯಾವಾಗಲೂ ಇನ್ನೊಂದು ಬೆಳಗು ಇರುತ್ತದೆ ; ಎಲ್ಲವನ್ನು ಉತ್ತಮಗೊಳಿಸಲು ಜೀವನ ನಮಗೆ ಮತ್ತೊಂದು ಅವಕಾಶ ಕೊಡುತ್ತದೆ.

ಯಾವಾಗಲೂ ನಿಮ್ಮ ಪ್ರೀತಿಪಾತ್ರರ ಸನಿಹದಲ್ಲಿರಿ ; ನೀವು ಅವರನ್ನು ಎಷ್ಟೊಂದು ಪ್ರೀತಿಸುತ್ತೀರಿ ಹಾಗೂ ನಿಮಗೆ ಅವರ ಅಗತ್ಯ ಎಷ್ಟಿದೆ ಎಂಬುದನ್ನು ಹೇಳುತ್ತಿರಿ ; ನಿಮಗೆ ಗೊತ್ತಿರುವ ಎಲ್ಲ ಪ್ರೀತಿ ತುಂಬಿದ ಪದಗಳನ್ನು ಬಳಸಿ.

ನಿಮ್ಮ ಯೋಚನೆಗಳು ಗುಪ್ತವಾಗಿಯೇ ಇದ್ದರೆ ನಿಮ್ಮನ್ನು ಯಾರೂ ನೆನೆಯಲಾರರು ; ಅವುಗಳನ್ನು ಅಭಿವ್ಯಕ್ತಿಗೊಳಿಸಿ. ನಿಮ್ಮ ಸ್ನೇಹಿತರು ಹಾಗೂ ಪ್ರೀತಿಪಾತ್ರರ ಬಗ್ಗೆ ನೀವು ಎಷ್ಟು ಕಾಳಜಿ ವಹಿಸುತ್ತೀರಿ ಎಂದು ತೋರಿಸಿ.

ಈ ಸಂದೇಶವನ್ನು ನೀವು ಪ್ರೀತಿಸುವ ಎಲ್ಲರಿಗೆ ಕಳಿಸಿ.
ನೀವು ಕಳಿಸದಿದ್ದರೆ, ನಾಳೆಯು ಕೂಡ ಇಂದಿನಂತೆಯೇ ಇರುತ್ತದೆ.
ಇದೀಗ ನಿಮ್ಮ ಸಂದೇಶದ ಸಮಯ.



ಅಭಿವೃದ್ಧಿಯ ಬೀದಿ ನಾಟಕ.
ನನ್ನ ಊರಿನಿಂದ ನಾನು ಬೆಂಗಳೂರಿಗೆ ಬರಬೇಕಾದರೆ ಪೀಣ್ಯ, ದಾಸರಹಳ್ಳೀಲಿ ನಡೀತಿರೋ ಅಗಾಧವಾದ ಮೆಟ್ರೋ, ರಸ್ತೆ, ಬಿಲ್ಡಿಂಗ್ ಕೆಲಸಗಳು ಇವನ್ನೆಲ್ಲ ದಾಟಿಕೊಂಡು ಬರಬೇಕು. ಅಲ್ಲಿ ನಡೀತಿರೋ ಕೆಲಸ, ಆ ದೈತ್ಯಾಕಾರದ ಯಂತ್ರಗಳು, ವಾಹನ ಪ್ರಮಾಣ ಇವನ್ನೆಲ್ಲ ನೋಡ್ತಾ ನೋಡ್ತಾ ನನಗೆ ವಿಚಿತ್ರವಾದ ಹಗಲುಕನಸುಗಳು ಬೀಳಲು ಶುರುವಾಗ್ತವೆ. ಇವೆಲ್ಲ ಏನು ? ಇವೆಲ್ಲ ಯಾವತ್ತಾದರೂ ಮುಗಿಯೋ ಕೆಲಸಗಳಾ ? ಇವು ಮಗಿದಾಗ ಮತ್ತೂ ಎಷ್ಟು ಲಕ್ಷ ವಾಹನಗಳು ರಸ್ತೆಗಿಳೀತವೋ ? ಆಗ ಮತ್ತೆ ಇವೆಲ್ಲ ಮೊದ್ಲಿಂದ...

ನೀವು ಪ್ರಯಾಣ ಹೊರಟು ನೋಡಿ, ಪ್ರತಿ ಹತ್ತು ಕಿಲೋಮೀಟರ್‌ಗೆ ಒಂದು ಕಡೆ ರಸ್ತೆ ರಿಪೇರಿ ನಡೀತಿರೋದು ಕಾಣಿಸ್ತದೆ. ಯಾವತ್ತೂ ಮುಗಿಯದ ರಿಪೇರಿ ಅದು. ಅಗೆದಲ್ಲೇ ಮತ್ತೆ ಮತ್ತೆ ಅಗೀತಾರೆ, ಮುಚ್ತಾರೆ. ಅಂದರೆ, ಇದು ಸರಕಾರಿ ಪ್ರಾಯೋಜಿತ ಬೀದಿ ನಾಟಕ ಅಷ್ಟೆ. ಜನರಿಗೆ ತೋರಿಸಬೇಕು- ಅಭಿವೃದ್ಧಿ ಆಗ್ತಿದೆ ಅಂತ. ಆದ್ರೆ ನಿಜವಾಗಿ ಆಗಿರಬಾರದು. ಹಾಗಾಗಿ ಇದು ಅಭಿವೃದ್ಧಿಯ ಬೀದಿ ನಾಟಕ.

No comments:

Post a Comment